ಬದುಕು
ಅಪ್ಪಟ ಗ್ರಾಮೀಣ ಭಾಷೆಯ ಸೊಗಡಿನಲ್ಲಿ ಉತ್ತರ ಕರ್ನಾಟಕದ ಅದರಲ್ಲು ಹೈದರಾಬಾದ ಕರ್ನಾಟಕದ ಕಲ್ಬುರ್ಗಿ ಜಿಲ್ಲೆಯ ಮೊಗಲಾಯಿ ಭಾಷೆಯನ್ನು ಖಡಕ್ಕಾಗಿ ಬಳಸಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಈ ನಮ್ಮ ಕಲ್ಬುರ್ಗಿ ಜಿಲ್ಲೆಯ ಭಾಷೆ
ಯನ್ನು ಕೊಂಡೊಯ್ದ ಕೀರ್ತಿ ಗೀತಾ ನಾಗಭೂಷಣ ಅವರಿಗೆ ಸಲ್ಲುತ್ತದೆ. ಹಿಂದುಳಿದ ಜಿಲ್ಲೆ ಎಂದು ಕರೆಯಿಸಿಕೊಳ್ಳುವ
ಕಲ್ಬುರ್ಗಿ ತನ್ನದೆ ಆದ ವಿಶಿಷ್ಟ ಭಾಷಾಸೊಬಗನ್ನು ಹೊಂದಿದೆ. ಇಂತಹ ಒಂದು ಮೊಗಲಾಯಿ ಭಾಷೆ ಕನ್ನಡ ಸಾಹಿತ್ಯ ಚರಿ
ತ್ರೆಯಲ್ಲಿ ಕಥೆ ಕಾದಂಬರಿಗಳಲ್ಲಿ ಬಳಕೆಯಾದದ್ದು ಬಹುಶ: ಗೀತಾ ನಾಗಭೂಷಣರವರಿಂದಲೆ ಇರಬೇಕು. ತಮ್ಮ ಕಥೆ ಕಾದಂಬರಿ ಲೇಖನಗಳ ಮೂಲಕ ಸಾಹಿತ್ಯದಲ್ಲಿ ವಿಶಿಷ್ಟವಾದ ತಳಹದಿಯ ಮೇಲೆ ತಮ್ಮದೆ ಆದ ಛಾಪವನ್ನು ಮೂಡಿಸಿದವರು.
ಗೀತಾ ನಾಗಭೂಷಣರ ಕಾದಂಬರಿಗಳಲ್ಲಿ ಸ್ತ್ರೀ ಪರ ನಿಲುವು, ಸಮಾನತೆ, ಜಾತಿ ಮೌಢ್ಯತೆ, ಮೇಲ್ವರ್ಗ, ಕೇಳ ವರ್ಗಗಳ ರೀತಿ-ರಿವಾಜು, ಆಚಾರ-ವಿಚಾರ, ಪ್ರಕೃತಿ ವರ್ಣನೆಗಳ ರಚನೆಗಳು ಅತ್ಯಂತ ವಿಶಿಷ್ಟ ರೀತಿಯಲ್ಲಿ ಚಿತ್ರಿತವಾಗಿದೆ.
“ಹಾಡ್ರೆ ದುರ್ಗಿ ಅಂದ್ರ ಏಟಕಿ ನಖರಾ
ಮಾಡ್ತಿರಲ್ರೆ ಹೊಯ್ಮಲ್ಲೇರೇ...
ಮ್ಯಾಲ ನೋಡಿದರ ಮುಗಲ ತುಂಬ
ಚುಕ್ಕಿಗೊಳ ನೆರೆದಾವ
ತೆಳಗ ನೋಡಿದರ ಬಯಲು ತುಂಬಾ
ಸಿಂದಿ ಬುರುಗಿನಂತ ಬೆಳ್ಳನ ಬೆಳದಿಂಗಳ ಬಿದ್ದಾದ
ನಿಮ್ಮುಂದ ತುಂಬಿದ ಸಿಂದಿ ಮಗಿಗೊಳು
ಎಲ್ಲೋರ ತಲ್ಯಾಗ ನಿಶಾ ಏರಾದ ... ಹಾಡ್ರಿ ಚೌಡಕಿ
ಬಾರಸ್ಗೋತ ಒಂದೆಡ್ಡು ಹಾಡ ಹಾಡ್ರಿ ನಿಮ್ಮದನಿ ಕೇಳಿ
ಬಾಳದಿನ ಆಯ್ತು”
ಇಂತಹ ಜವಾರಿ ಶೈಲಿಯ ಭಾಷೆ ಮತ್ತು ಕೆಳಮಂದಿಯ ಖುಲ್ಲಂ-ಖುಲ್ಲಾ ಬದುಕಿನ ಚಿತ್ರಣಗಳು ಗೀತಾರವರ ಕಾದಂಬರಿಗಳಲ್ಲಿ ಎದ್ದುಕಾಣುತ್ತದೆ.
ಪ್ರಾದೇಶಿಕ ತಳಿಯ ಬದುಕು ಮೊಘಲಾಯಿ ಏರಿಯಾದ ಟಿಪಿಕಲ್ ಭಾಷೆಯಿಂದಾಗಿಯೇ ಗೀತಾ ಅವರು ಸಮಕಾಲೀನ ಕನ್ನಡ ಸಾಹಿತ್ಯದ ಲೇಖಕಿಯರ ಸಾಲಿನಲ್ಲಿ ವಿಶಿಷ್ಟರೆನಿಸಿದ್ದಾರೆ. ನವೋದಯ, ಪ್ರಗತಿಶೀಲ, ನವ್ಯ ಸಾಹಿತ್ಯ ಘಟ್ಟಗಳ ಸೆರಗಿಡಿದೇ ಬಂದ ಬಂಡಾಯ-ದಲಿತ ಸಾಹಿತ್ಯ ಚಳುವಳಿಯು ಈ ತೆರನಾದ ಸಂವೇದನೆಗಳಿಂದಾಗಿಯೇ ಗಮನ ಸೆಳೆದವು.
ಉತ್ತರ ಕರ್ನಾಟಕದ ಖಡಕ್ಕ ಭಾಷೆ ಕಲ್ಬುರ್ಗಿಯ ಮೊಗ ಲಾಯಿ ಭಾಷೆಯನ್ನು ತನ್ನ ಕಾದಂಬರಿ ‘ಬದುಕು’ವಿನಲ್ಲಿ ಅತ್ಯಂ ತ ಮಹತ್ವದ ರೀತಿಯಲ್ಲಿ ಬಳಸಿದ್ದಾರೆ. ಇಂಥ ಕಾಲ ಘಟ್ಟದಲ್ಲಿ ಪ್ರಥಮ ಬಾರಿಗೆಯೆಂಬಂತೆ ದಲಿತ ಹಿಂದುಳಿದ ಮತ್ತು ಶೋಷಿ ತ ಸಮುದಾಯಗಳ ಅದರಲ್ಲಿಯೂ ಮಹಿಳೆಯರು ತಮ್ಮ ಬದು ಕು ಬವಣೆಯನ್ನು ಕುರಿತು ಈ ಕಾದಂಬರಿಯಲ್ಲಿ ಅತ್ಯಂತ ವಿಶಿ ಷ್ಟ ರೀತಿಯಲ್ಲಿ ತಮ್ಮ ನೋವಿನಂತೆಯೇ ಅದರಲ್ಲಿ ನಲಿವು ಕಂ ಡು ಕೊಂಡ ಅನೇಕ ಪಾತ್ರಗಳು ಬರುತ್ತವೆ. ಗೀತಾ ಕಥೆಯನ್ನು ಹೇಳುತ್ತಾರೆ ಆದರೆ ಕಥೆಕಟ್ಟುವದಿಲ್ಲ ಎಂಬ ಹೇಳಿಕೆ ವಿಮರ್ಶ ಕರ ಶಾಸ್ತ್ರಿಯ ಮಾನದಂಡಗಳ ಬಗೆಗೆ ತಲೆ ಕೆಡಿಸಿಕೊಳ್ಳದೆ ಸುಮ್ಮನೆ ತಮ್ಮ ಪಾಡಿಗೆ ತಾವು ಬರವಣಿಯಲ್ಲಿ ತೊಡಗಿದರು.
ಕೇವಲ ತಳವಾರ ಜಾತಿ ಹುಡುಗಿಯೊಬ್ಬಳು ತಾನು ಓದಬೇಕು ಪದವಿ ಪಡೆಯಬೇಕು ಎಂಬ ಮಹಾದಾಸೆಯೊಂದಿಗೆ ತನ್ನೂ ರಿನಿಂದ ಕಲ್ಬುರ್ಗಿಯಂತಹ ಪಟ್ಟಣಕ್ಕೆ ಬಂದು ಬಿ.ಎ ಬಿ.ಎಡ್, ಎಂ,ಎ ಪದವಿ ಪಡೆದು ಸಾಹಿತ್ಯದಲ್ಲಿ ಕೃಷಿ ಮಾಡಿದವರು. ಬಡ ವರ ಶೋಷಿತರ ನಿರಾಶ್ರಿತರ ಕೆಳವರ್ಗದವರ ಪರ ನ್ಯಾಯ ದೊ ರಕಿಸಲು ಹೋರಾಡದೆ ತಮ್ಮಲೇಖನಿಯ ಲೇಖನಗಳ ಮೂಲಕ ಉತ್ತರಿಸಿದರು. ಕೆಳವರ್ಗದ ಮಂದಿಯ ನೋವು-ನಲಿವುಗಳು ದೇವದಾಸಿಯರ [ಜೋಗಣಿಯರ] ಪಟ್ಟಕ್ಕೆ ಹಾಕಿ ಮುತ್ತುಕಟ್ಟುವ ಆ ಅನಿಷ್ಟ ಪದ್ಧತಿಯ ಬೇರು ಸಹಿತ ಬುಡ ಮೇ ಲು ಮಾಡಲು ‘ಬದುಕು’ ಕಾದಂಬರಿ ಮೂಲಕ ತಿಳಿಸಿದ್ದಾರೆ.
ಬದುಕು ಕಾದಂಬರಿಯಲ್ಲಿ ವಿಭಿನ್ನ ರೀತಿಯಲ್ಲಿ ಚಿತ್ರಿತವಾಗಿ ರುವದು. ಕೆಳವರ್ಗದ ನಿರ್ಗತಿಕರ ಬಗೆಗಿನ ಕಥೆಯಾದರು ಇದು ಮೆಲ್ನೋಟಕ್ಕೆ ಶಿವಳ್ಳಿಯ ಜಮಾದಾರ ಮಲ್ಲಪ್ಪನ ಮನೆ ಕಥೆಯಂತೆ ಕಂಡುಬರುತ್ತದೆ. ಆದರೆ ಇದೊಂದು ಕೆಳವರ್ಗದ ಶೋಷಿತರ ನಿರಾಶ್ರಿತರು ಹಿಂದುಳಿದವರು ದೇವದಾಸಿಯವ ರಂತಹ ದಾರುಣ ಜೀವನ ನಡೆಸುವವರತ್ತ ಈ ಕಥೆ ಹೆಣೆದು
ಕೊಳ್ಳಲಾಗಿದೆ.
ಇಲ್ಲಿ ಕೆಳವರ್ಗದ ರೀತಿ ರಿವಾಜು, ಆಚಾರ-ವಿಚಾರ , ಪ್ರೀತಿ-ಪ್ರೇಮ, ಪ್ರಣಯ, ಕಾಮ,ಹಾದರ, ನಗು-ಅಳು, ಕಳುವು, ಹಸಿ ವು ,ಮುಂತಾದವುಗಳೇಲ್ಲ ಕಣ್ಣಿಗೆ ಕಟ್ಟಿದ ಹಾಗೆ ಚಿತ್ರಣವಾಗಿವೆ.
೨೦೦೧ರಲ್ಲಿ ಪ್ರಕಟವಾದ ಈ ಬದುಕು ಕಾದಂಬರಿ ಇಲ್ಲಿಯ ವರೆಗು ಅಂದರೆ ೨೦೧೦ರ ವೇಳೆಗೆ ಮೂರು ಸಲ ಮರು ಮುದ್ರ ಣ ಕಂಡಿದೆ. ೨೦೦೧ ನಂತರ ೨೦೦೫,೨೦೦೭,೨೦೧೦. ೨೦೧೦ ರಲ್ಲಿ ನಡೆದ ೭೬ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸ ಮ್ಮೇಳನದಲ್ಲಿ ಗೀತಕ್ಕನವರ ಬಹುತೇಕ ಎಲ್ಲಾ ಕಥೆ ಕಾದಂಬ ರಿಗಳು ಗದಗನ ಕನ್ನಡ ಜಾತ್ರೆಯಲ್ಲಿ ಒಂದೂ ಬಿಡದೆ ಮಾರಾ
ಟ ವಾಗಿದ್ದವು. ೭೬ನೇಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು ಗೀತಾನಾಗಭೂಷಣ ಅವರೆ ಆಗಿದ್ದರು.
ಬದುಕು ಕಾದಂಬರಿ ಕೆಳವರ್ಗದ ಖುಲ್ಲಂ ಖುಲ್ಲಾ ಭಾಷೆ ಬಳಸಿ
ರುವದರಿಂದ ಇದು ಯಲ್ಲಿಯೂ ಅಶ್ಲೀಲವೆಂಬಂತೆ ಭಾಸವಾ
ಗುವುದಿಲ್ಲ. ಈ ಕಾದಂಬರಿ ಪ್ರಕಟವಾದ ನಂತರ ಅನೇಕ ಕವಿ
ಗಳು ಲೇಖಕರು,ವಿಮರ್ಶಕರು ತಮ್ಮ ಅಭಿಪ್ರಾಯಗಳನ್ನು ಕಾದಂಬರಿ ಓದಿದ ನಂತರ ತಿಳಿಸಿದ್ದಾರೆ. ೪೯೧ ಪುಟಗಳ ಈ ಕಾದಂಬರಿ ಅತ್ಯಂತ ಮಹತ್ವದ ರೀತಿಯಲ್ಲಿ ಬರೆದಿದ್ದಾರೆ. ಗೀತಾರವರು ಇಂತಹ ಒಂದು ವಿಶಿಷ್ಟವಾದ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕೆಡಮಿ ಪ್ರಶಸ್ತಿ ಬಂದಿರುವುದು ನಿಜಕ್ಕೂ ಹೆಮ್ಮೆಯ ವಿಷಯ.
ಪಾತ್ರಗಳು:
ಮಲ್ಲಪ್ಪ - ಶಿವಳ್ಳಿಯ ಜಮಾದಾರ ಕೆಳಮಂದಿಯ ಪ್ರಭಾವಿ ವ್ಯಕ್ತಿ .
ಮಲ್ಲಮ್ಮ - ಮಲ್ಲಪ್ಪ ಜಮಾದರನ ಹೆಂಡತಿ.
ಶಾಣಮ್ಮ - ಮಲ್ಲಪ್ಪ ಜಮಾದರನ ಮೊದಲ ಮಗಳು ಬಟ್ಟಿ ಗಿರಣಿ ಕೆಲಸದಲ್ಲಿ ಇರುವ ಹಾಲಪ್ಪನ ಹೆಂಡತಿ ಶಾಣಮ್ಮನ ಮಕ್ಕಳು ಬೆಳ್ಳಿ ಮತ್ತು ಶಿವು
ಕೌಶಮ್ಮ - ಮಲ್ಲಪ್ಪ ಜಮಾದರನ ಎರಡನೇ ಮಗಳು ಸೊಲ್ಲಾಪುರದ ಮಾರ್ತಾಂಡನ ಹೆಂಡತಿ ಸಾಹುಕಾರ ಲಿಂಗರಾಜನ ಪ್ರೇಯಸಿ
ಕಲ್ಯಾಣಿ - ಜಮಾದಾರ ಮಲ್ಲಪ್ಪನ ಕೊನೆ ಮಗ. ಶಾಣಮ್ಮನ ಮಗಳು ಬೆಳ್ಳಿಯ ಗಂಡ
ಪತರು ನಜಮಾ - ಮಲ್ಲಪ್ಪ ಜಮಾದಾರನ ಸಾಕು ಮಗ ಮುಸ್ಲೀಂ ಆದರು ಸ್ವಂತ ಮಗನಂತೆ ಬೆಳೆಸಿದ. ಪತರನ ಹೆಂಡತಿ ನಜಮಾ
ಈ ಪ್ರಮುಖ ಪಾತ್ರಗಳಲ್ಲದೆ ಇನ್ನೂ ಅನೇಕ ಪಾತ್ರಗಳು ಬರು
ತ್ತವೆ. ಕಲ್ಯಾಣಿ ಬೆಳ್ಳಿಯರ ಮಗ ಸಣ್ಣ ಮಲ್ಲು. ಮಲ್ಲಪ್ಪನ ನೆರೆ
ಮನೆಯ ನಾಗವ್ವ ಆಯಿ ಹಾಲಪ್ಪ ಮತ್ತು ಮಾರ್ತಾಂಡನ ಸಂ
ಬಂಧಿಕರು. ಕಾಶಮ್ಮಳ ಗೆಳತಿಯರು ಮಲ್ಲಪ್ಪ ಜಮಾದಾರನ ಗೆಳೆಯರು ಮುಂತಾದ ಚಿಕ್ಕ ಚಿಕ್ಕ ಪಾತ್ರಗಳು ಬರುತ್ತವೆ. ಈ ಚಿಕ್ಕ ಪಾತ್ರಗಳು ಆಯಾ ಸನಿವೇಶದ ರೂಪುಗಳಿಗೆ ನಿದರ್ಶನ
ವಾಗಿವೆ.
ಈ ಕಾದಂಬರಿಯಲ್ಲಿ ಬರುವ ಪಾತ್ರಗಳು ಸನ್ನಿವೇಶಗಳು ಕೇ
ವಲ ಕಾಲ್ಪನಿಕವಾದರು ಅದರಲ್ಲಿ ಬರುವ ಪಾತ್ರಗಳು ಸನ್ನಿ
ವೇಶಗಳು ಜೀವಂತಿಕೆಯನ್ನು ತಳೆದು ನಿಂತಿದೆ. ಅಲ್ಲಿ ಇಲ್ಲಿ ನೋಡಿ ಬಂದದ್ದು ಹೇಳದೆ ಕಣ್ಣಿಗೆ ಕಟ್ಟಿದ ಹಾಗೆ ಬರೆದಿರುವ ಈ ಕಾದಂಬರಿಯಲ್ಲಿ ಹಬ್ಬ-ಹರಿದಿನಗಳು, ದೇವರು-ದಿಂಡರು, ಊರು ಕೇರಿ, ಜಾತಿ-ಮತ, ಆಹಾರ-ವಿಹಾರ, ಮತ್ತು ಬಟ್ಟೆ-ಬರೆಗಳನ್ನು ಅತ್ಯುತ್ಯಮವಾಗಿ ಇಲ್ಲಿ ವಿವರಿಸಿದ್ದಾರೆ. ಪ್ರಕೃತಿಯ ವರ್ಣನೆಯಂತು ಅಸಾಧ್ಯವಾಗಿ ಈ ಕಾದಂಬರಿ ವರ್ಣಿಸಿದ್ದಾರೆ.
ಊರು-ಕೇರಿ :
ಈ ಬದುಕು ಕಾದಂಬರಿಯಲ್ಲಿ ಮುಖ್ಯವಾಗಿ ಬರುವ ಹಳ್ಳಿ
ಯಂದರೆ ಶಿವಳ್ಳಿ, ಶಿವಳ್ಳಿಯಲ್ಲಿ ಮೂರು ಕೇರಿಗಳಿದ್ದವು ಮ್ಯಾ
ಗೇರಿ, ಕೆಳಗೇರಿ, ಮತ್ತು ಹೋಲಗೇರಿ.
ಈ ರೀತಿಯಾಗಿ ಮೂರು ಕೇರಿಗಳಲ್ಲಿ ಜನರು ವಾಸಿಸುತ್ತಿದ್ದರು. ಅವರಲ್ಲಿ ಗೌಡ, ಕುಲಕರ್ಣಿ, ಜಮಾದಾರ, ರೆಡ್ಡಿ, ಸುಬೇದಾರ, ನಾಯಕ, ಸಾವುಕಾರ ಇಂಥವರು ತಮ್ಮ ತಮ್ಮ ಕೇರಿಗಳ ನಾಯಕರಾಗಿದ್ದರು.
ಕೇರಿಗಳಲ್ಲಿ ತಮ್ಮ ತಮ್ಮ ಇಷ್ಟಾನುಸಾರ ಶಕ್ಯಾನುಸಾರ ಮನೆ
ಗಳನ್ನು ನಿರ್ಮಿಸಿಕೊಂಡಿದ್ದರು. ಅವು ಕೆಲವು ಗಚ್ಚಿನ ಮನೆ, ಹೆಂಡಿಮನೆ, ಅರಜಪ್ಪನಮನೆ, ಮಣ್ಣಿನಮನೆ, ಝೋಪಡಿಮನೆ, ಮತ್ತು ಸಿಂದಿ ಪೊರಕೆ ಮನೆಗಳು ಅದ್ದವು.
ಜಾತಿ-ಮತ:
ಊರು ಎಂದ ಮೇಲೆ ಅಲ್ಲಿ ಜಾತಿ ಮತ ಇದ್ದೇ ಇರುತ್ತೆ ಅಂದ ಹಾಗೆ ಈ ಕಾದಂಬರಿಯಲ್ಲಿ ಅನೇಕ ಜಾತಿಯ ಜನ ಇದ್ದರು. ಅವರು ಲಿಂಗಾಯತರು, ಕುಲಕರ್ಣಿಯರು, ಮ್ಯಾಗೇರಿ
ಯಲ್ಲಿದ್ದರೆ, ಕಬ್ಬಲಗೇರು, ಕುರುಬರು, ಗೊಲ್ಲರು, ಪಿಂಜಾರರು, ಬುಡಬುಡಿಕೆಯವರು, ಬ್ಯಾಡರು, ಮುಂತಾದವರು ಕೆಳಗೇರಿ
ಯಲ್ಲಿ ವಾಸಿಸುತ್ತಿದ್ದರು.
ಬಟ್ಟೆ-ಬರೆ:
ಊರು-ಕೇರಿ, ಜಾತಿ-ಮತಗಳ ನಡುವೆ ಬಟ್ಟೆ ಬರೆಗಳ ಉಲ್ಲೇ
ಖವಿದೆ. ನಾರಿಯರು ಉಟ್ಟುಕೊಳ್ಳುವ ಸೀರೆಗಳ ವಿಧಗಳ ವಿಧ
ಗಳು ಸೇರಿವೆ. ಇಂದಿನ ಈ ಪ್ಯಾಷ್ಯನ ಯುಗದಲ್ಲಿ ವಿವಿಧ ಜರ
ತಾರ ಸೀರೆಗಳ ನಡುವೆಯು ಅಂದಿನ ಸೀರೆಗಳ ಅಂದ ಚೆಂದ ಬಣ್ಣಿಸುತ್ತವೆ. ಕರಿ ಚಂದ್ರಕಾಳಿ ಸೀರೆ, ಇಲಕಲ್ಲ್ ಸೀರೆ, ಕೆಂಪು ಜರಿಯಂಚಿನ ಸೀರೆ, ಕಾದಿಗೆಗಪ್ಪಿನ ಸೀರೆ, ಜರದಮ ಸೀರೆ, ದಡಿ ಸೀರೆ, ಟೋಪ ಸೇರಗಿನ ಸೀರೆ, ರೆಸಮಿ ಸೀರೆ, ಶಾಂ
ಪೂರಿ ಸೀರೆ ಮತ್ತು ಕಾಟನ ಸೀರೆ ಇವುಗಳ ಜೊತೆಗೆ ಗುಳೇ
ದಗುಡ್ಡದ ಸೂರ್ಯನ ಮತ್ತು ಥೇರಿನ ಛಾಪಿರುವ ಕುಪ್ಪಸಗಳ ವರ್ಣನೆ ಇದೆ.
ಸೀರೆಗಳ ಜೊತೆಗೆ ಪುರುಷರ ದೋತುರ, ರುಮಾಲು, ಶಲ್ಯಗಳ ಸಹ ಈ ಕಾದಂಬರಿಯಲ್ಲಿ ಬಂದಿವೆ.
ಆಹಾರ-ವಿಹಾರ [ಸಸ್ಯಹಾರಿ] :
ಈ ಕಾದಂರಿಯಲ್ಲಿ ಅಪ್ಪಟ ಉತ್ತರ ಕರ್ನಾಟಕದ ಊಟದ ಬಗ್ಗೆ ಹೇಳಲಾಗಿದೆ. ಜಮಾದಾರ ಮಲ್ಲಪ್ಪನ ಮನೆಯಲ್ಲಿ ಮಾಡುವ ಆಹಾರ-ವಿಹಾರಗಳ ಬಗ್ಗೆ ತಿಳಿಸಲಾಗಿದೆ. ಪುಂಡಿಪಲ್ಯ, ಹುಣಚಿ
ಕಾಯಿ, ಕಾರ ಕೆನೆಮೊಸರು, ಜೋಳದರೊಟ್ಟಿ, ಹುಳಬಾನ, ಗೋಧಿ ಚಪಾತಿ ಗಟ್ಟಿಬ್ಯಾಳಿ, ತಾಳಸಿದ ಕಡ್ಲಿಪಲ್ಯ,ಅಕ್ಕಿಬಾನ, ಹೋಳಿಗೆ,ಸಜ್ಜಿ ರೊಟ್ಟಿ,ಸಜ್ಜಕ,ಉಪ್ಪಿಟ್ಟು,ಮಂಡಕ್ಕಿ,ಸಂಡಿಗೆಗಳ ಬಗ್ಗೆ ಹೇಳಲಾಗಿದೆ.
ಆಹಾರ ವಿಹಾರ ( ಮಾಂಸಾಹಾರ):
ಮಾಂಸಾಹಾರದಲ್ಲಿ ಕೋಳಿಪಲ್ಲ್ಯ,ಕುರಿಖಂಡದ ಪಲ್ಯ, ಮೀನು,
ಟಗರು,ಉಡ,ಮೊಲ,ಪಾರಿವಾಳಗಳಂತಹ ಪ್ರಾಣಿಗಳ ಊಟದ ರುಚಿಯನ್ನು ವರ್ಣಿಸಲಾಗಿದೆ. ಸಸ್ಯಾಹಾರಿ,ಮಾಂಸಾಹಾರಿಗಳೆನ್ನದೆ ಎಲ್ಲರೂ ಒಟ್ಟಿಗೆ ಕುಳಿತು ಊಟ ಮಾಡುವ ಪದ್ಧತಿ ಇತ್ತು. ಮತ್ತು ಸಿಂದಿ ಕುಡಿಯುವಾಗ ನೆಂಜಿಕೊಳ್ಳುವುದಕ್ಕೆ ಶೇಂಗಾ ಬೀಜಗಳನ್ನು ಎಣ್ಣೆಯಲ್ಲಿ ಉಪ್ಪು ಖಾರ ಹಾಕಿ ಹುರಿಯುತ್ತಿದ್ದರು.
ಹಬ್ಬ - ಹರಿದಿನ :
ಹೋಳಿಹುಣ್ಣಿಮೆ ,ಶಿವರಾತ್ರಿ, ಮೊಹರಂ, ಕಾರಹುಣ್ಣಿಮೆ,
ಯುಗಾದಿ ಎಳ್ಳಮವಾಸಿ, ನಾಗರಪಂಚಮಿ ಮತ್ತು ಕಾಮದಹನ ಮುಂ. ಹಬ್ಬ ಹರಿದಿನಗಳ ಬಣ್ಣನೆ ಇದೆ.
ದೇವರು-ದಿಂಡರು:
ಸೂರ್ಯ ಚಂದ್ರ, ಚುಕ್ಕಿ, ಹುಣ್ಣಿವೆ,ಅಮವಾಸಿಗಳ ವರ್ಣನೆಗಳ ಜೊತೆಗೆ ದೇವರಿಗೆ ನಡೆದುಕೊಳ್ಳುವ ಸಹ ಜನಗಳ ಭಕ್ತಿಯನ್ನು ಒರೆಗೆ ಹಚ್ಚುತ್ತಿದ್ದರು. ಕಲ್ಬುರ್ಗಿ ಶರಣಬಸವ, ಸಾವಳಗಿ ಶಿವ
ಲಿಂಗೇಶ್ವರ ಚುಂಚರ ಮಹಾಪುರ ತಾಯಿ ಖತಲ ಸಾಬಪೀಠ
ಕೆಳಗೇರಿ ಮರಗಮ್ಮ ಹಣಮಪ್ಪ ಲಕ್ಷೀ ಗೋಳ್ಯಾದ ಲಕ್ಕವ ನಾಗವಿ ಎಲ್ಲಮ್ಮ ಗುಡ್ಡದ ಮಲ್ಲಯ್ಯ ಮತ್ತು ಖಾಜಾ ಬಂದೇ
ನವಾಜ ಮುಂತಾದ ದೇವರುಗಳ ಜೋತೆಗೆ ಜನರ ಭಕ್ತಿ ಕಾಣಸಿಗುತ್ತದೆ.
ಈ ಕಾದಂಬರಿ ಆರಭದಿಂದ ಅಂತ್ಯದವರೆಗೂ ಸಿಂದಿಗೊಬ್ಬಿಗಳ ಬಗ್ಗೆ ಬಹಳಷ್ಟು ಹೇಳಲಾಗಿದೆ. ಇಂದಿನ ರಮ್, ವಿಸ್ಕಿ, ಬ್ರಾಂಡಿ
ಗಳ ಮಧ್ಯದಲ್ಲಿಯು ಸಹ ಸಿಂದಿಗಳು ಬಹಳಷ್ಟು ಪ್ರಸಿದ್ಧವಾಗಿವೆ. ಸಿಂದಿಗಳ ಬರಿಯ ಬುರುಗಿನಂತೆ ಇದ್ದು ಇದರ ರುಚಿ ಹೇಗಿದೆ ಎಂಬುದನ್ನು ನೋಡಲು ಈಗ ಸಿಂದಿ ಸಿಗುವದಿಲ್ಲ ಸಿಗುವದಿಲ್ಲ ಸಿಂದಿ ಮಗಿಗಳು ಸಹ ಎಲ್ಲೂ ಕಾಣುವುದಿಲ್ಲ ಈಚಲು ಮರಗ
ಳಂತೂ ಈಗ ಬರಿ ಪುಸ್ತಕದ ಚಿತ್ರವಾಗಿದೆ.
ಆಮಾದಾರ ಮಲ್ಲಪ್ಪನ ಮನೆಯಲ್ಲಿ ಎಲ್ಲರೂ ದೊಡ್ಡವರ ಸಣ್ಣ
ವರೆಂಬುದು ಇಲ್ಲದೆ ಅಂಗಳದಲ್ಲಿ ಕುಳಿತು ಕುಡಿಯುತ್ತಿದ್ದರೆ. ಆದ
ರೆ ಈಗ ಜನ ಸಿಂದಿ ಬಗ್ಗೆ ಹೇಳಿದರೆ ಸಾಕು ಸಿಂದಿ ಅನ್ನುವ ಶಬ್ದದ ಪರಿಚಯವೆ ಇಲ್ಲವೆಂದು ತೋರುತ್ತದೆ.
ಶಿವಳ್ಳಿಯ ಜಮಾದಾರ ಮಲ್ಲಪ್ಪ ಅವನ ಹೆಂಡತಿ ಮಲ್ಲಮ್ಮನ ಶಿವಳ್ಳಿಯ ಕೆಳಗೇರಿ ಓಣಿಯಲ್ಲಿ ಇವದೊಂದು ಮನೆ ಇತ್ತು. ಒಂ
ದು ತೋಟವು ಸಹ ಇತ್ತು. ಸರ್ಕಾರ ಕೊಟ್ಟ ಜಮೀನು ಇತ್ತು. ಮಲ್ಲಪ್ಪ ಇವರು ಇಬ್ಬರು ಹೆಣ್ಣು ಮಕ್ಕಳು ಒಬ್ಬ ಗಂಡು ಮಗ. ಮೊದಲನೆ ಮಗಳು ಶಾಣಮ್ಮ ಈಕೆಯನ್ನು ಗುಲ್ಬರ್ಗಾ ಶಹ
ರದ ಬಟ್ಟಿ ಗಿರಣಿಯಲ್ಲಿ ಕೆಲಸ ಮಾಡುವ ಹಾಲಪ್ಪನೊಂದಿಗೆ ಮದುವೆ ಮಾಡಿಕೊಡಲಾಯಿತ್ತು. ಗಂಡ-ಹೆಂಡತಿ ಇಬ್ಬರು ಸಂತೋಷದಿಂದ ಇದ್ದರು. ಇವರಿಬ್ಬರ ಮಕ್ಕಳೆ ಬೆಳ್ಳಿ ಮತ್ತು ಶಿವು.
ಜಮಾದಾರ ಮಲ್ಲಪ್ಪ ಶಿವಳ್ಳಿಯಲ್ಲಿ ಕೆಳಗೇರಿಯಲ್ಲಿ ಅತ್ಯಂತ ಹೆಸರುವಾಸಿಯಾಗಿದ್ದ. ಎಲ್ಲ ಧರ್ಮ ಕಾರ್ಯಗಳು ಜಾತ್ರೆ ಮುಂ
ತಾದ ಹಬ್ಬ ಹರಿದಿನಗಳನ್ನು ಸಂತೋಷದಿಂದ ಆಚರಿಸು
ತ್ತಿದ್ದನು. ಮಲ್ಲಪ್ಪನ ಸಹಾಯಕನಾಗಿ ಪತರು ಎಂಬ ಮುಸ್ಲಿಂ ಯುವಕನಿದ್ದನು. ಅವನ ತಂದೆಯಾಗಿ ಸ್ವಂತ ಮಗನಂತೆ ಬೆಳೆಸಿದ. ಮಲ್ಲಪ್ಪನ ಮನೆಯಲ್ಲಿ ಜಾತಿ ಭೇದ ಮಾಡದೆ ಎಲ್ಲರನ್ನು ಸಮಾನನಾಗಿ ನೋಡಿಕೊಂಡಿದ್ದ ಮನೆಯವರ ಎಲ್ಲರು ಚೆಂದದಿಂದ ಅಂಗಳದಿಂದಲ್ಲಿ ಕುಳಿತು ಊಟ ಮಾಡು
ತ್ತದ್ದರು ಈಚಲು ಮರದ ಸಿಂದಿಗಳನ್ನು ಕುಡಿಯುತ್ತಿದ್ದರು.
ಈ ಮಲ್ಲಪ್ಪನ ಎರಡನೆಯ ಮಗಳೆ ಕಾಶಮ್ಮ ಕಪ್ಪು ಮುಖದ ಚಲುವೆ. ಈಕೆ ಎಂದು ದಿನ ತೋಟದಿಂದ ಬರಬೇಕಾದರೆ ಆ ಶಿವಳ್ಳಿಯ ಸಾವುಕಾರನ ಮಗ ಲಿಂಗರಾಜ ಎದುರಾಗುತ್ತಾನೆ. ಆಕಸ್ಮಿಕ ಬೇಟಿಯ ಪ್ರೀತಿಗೆ ತಿರುಗಿ ಪ್ರಣಯಕ್ಕೆ ತಿರುಗಿತು ಇದರ ವಿಷಯ ತಿಳಿದ ಸಾವುಕಾರ ಲಿಂಗರಾಜಪ್ಪನ ಅಪ್ಪ ಮಲ್ಲ
ಪ್ಪನನ್ನು ಕರೆದು ಹಿಯಾಳಿಸಿ ಮಾತನಾಡಿ ಕಳುಹಿಸುತ್ತಾನೆ. ಇದರಿಂದ ಮನೆಯರೆಲ್ಲ ಮನನೊಂದ ದು:ಖಕ್ಕಿಡಾಗುತ್ತಾರೆ. ಹೇಗಾದರು ಮಾಡಿ ಕಾಶಮ್ಮಳನ್ನು ಬೇರೆ ಮದುವೆ ಮಾಡ
ಬೇಕು ಎಂದು ನಿಶ್ಚಯಿಸುತ್ತಾರೆ. ಆದರಿಂದ ಮಲ್ಲಪ್ಪನ ಮಗ ಕಲ್ಯಾಣಿ ಮತ್ತು ಪತರನ ಜೊತೆ ಕಲ್ಬುರ್ಗಿಯ ಹಾಲಪ್ಪನ ಮನೆಗೆ ಕಾಶಮ್ಮಳನ್ನು ಕಳುಹಿಸುತ್ತಾರೆ.
ಕಾಶಮ್ಮಳನ್ನು ಕಲ್ಬುರ್ಗಿಯಲ್ಲೆ ಯಾರಾದರು ವರ ನೋಡಿ ಕೊಡಬೇಕೆಂದು ನಿಶ್ಚಯಿಸುತ್ತಾರೆ. ಆದರೆ ಕಲ್ಬುರ್ಗಿಯಲ್ಲೆ ಬಿಟ್ಟು ಮಲ್ಲಪ್ಪ ಕಲ್ಯಾಣಿ ಪತರುನನ್ನು ಊರಿಗೆ ಕರೆದುಕೊಂಡು ಬರು
ತ್ತಾನೆ. ಮುಂದೆ ಕೆಲ ದಿನಗಳ ನಂತರ ಕಾಶಮ್ಮ ತನ್ನ ಹಳೆಯ ಸಂಪೂರ್ಣ ನೆನಪುಗಳನ್ನು ಮರೆತು ಹೊಗುತ್ತಾಳೆ. ಹಾಲಪ್ಪ ಸ್ನೇಹಿತ ಮಾರ್ತಾಂಡ ಸೋಲ್ಲಾಪುರದ ಬಟ್ಟೆಗಿರಣಿಯಲ್ಲಿ ಕೆಲ
ಸ ಮಾಡುತ್ತಿರುತ್ತಾನೆ. ಹುಡುಗನನ್ನು ನೋಡಿ ಕಾಶಮ್ಮ ಒಪ್ಪು
ತ್ತಾಳೆ. ಸಂತೋಷದಿಂದ ಎಲ್ಲರು ಕಾಶಮ್ಮ ಮಾರ್ತಾಂಡರ ವಿವಾಹ ಮಾಡಿ ಯುವ ಜೋಡಿಗಳನ್ನು ಸೋಲ್ಲಾಪುರಕ್ಕೆ ಕಳು
ಹಿಸುತ್ತಾರೆ. ಇಲ್ಲಿ ಎಲ್ಲರು ಸಂತೋಷದಿಂದ ಕಾಲ ಕಳೆಯು
ತ್ತಾರೆ.
ಮಲ್ಲಪ್ಪನ ಮಗ ಕಲ್ಯಾಣಿ ತನ್ನ ಅಕ್ಕನ ಮಗಳಾದ ಬೆಳ್ಳಿಯನ್ನು ಪ್ರೀತಿಸುತ್ತಾನೆ. ಮತ್ತು ಮಲ್ಲಪ್ಪನ ಮಗಳಾದ ಶಾಣಮ್ಮಳು ಕೂಡಾ ಕಲ್ಯಾಣಿಗೆ ಬೆಳ್ಳಿಯನ್ನೇ ಕೊಟ್ಟು ತವರು ಮನೆ ಸಂ
ಬಂಧ ಗಟ್ಟಿ ಗೊಳಿಸಬೇಕೆಂದು ನಿರ್ಧರಿಸುತ್ತಾಳೆ. ಇದಕ್ಕೆ ಹಾಲ
ಪ್ಪನ ಸಮ್ಮತಿಯು ಸಹ ದೊರೆಯುತ್ತದೆ. ಆಗ ಎಲ್ಲರೂ ಸೇರಿ ಕಲ್ಯಾಣಿ ಮತ್ತು ಬೆಳ್ಳಿಯರ ಮದುವೆ ಮಾಡುತ್ತಾರೆ.
ಸೋಲ್ಲಾಪುರದಲ್ಲಿದ್ದ ಕಾಶಮ್ಮ ತನ್ನ ತವರು ಮನೆಯಾದ ಶಿವ
ಳ್ಳಿಗೆ ಯಾವ ಸಮಾರಂಭಕ್ಕೂ ಯಾವ ಕಾರ್ಯಕ್ಕೂ ಬಂದಿ
ರುವದಿಲ್ಲ ಈಗಲಾದರು ಕಾಶಮ್ಮನನ್ನು ಕರೆಯಲೇಬೆಕೆಂದು ನಿರ್ಧರಿಸುತ್ತಾನೆ. ಮಲ್ಲಪ್ಪ ಕಾರಹುಣ್ಣಿವೆ, ಮೊಹರಂ ಒಂದೇ ಸಾರಿ ಹಬ್ಬಗಳು ಬಂದಿರುವದರಿಂದ ಹಾಲಪ್ಪನನ್ನು ಮಲ್ಲಪ್ಪ ಕಾಶಮ್ಮನನ್ನು ಕರೆಯಲು ಸೋಲ್ಲಾಪುರಕ್ಕೆ ಕಳುಹಿಸುತ್ತಾನೆ. ಕಾಶಮ್ಮ ಮತ್ತು ಶಾಣಮ್ಮ ಇಬ್ಬರು ಹಬ್ಬಕ್ಕೆ ಬರುತ್ತಾರೆ.
ಹಬ್ಬದ ದಿನದಂದು ಅಲಯ ಪೀಠಗಳ ಮೆರವಣಿಗೆ ನಡೆ
ಯುವಾಗ ಕಾಶಮ್ಮ ಸಾವುಕಾರ ಲಿಂಗರಾಜನನ್ನು ನೋಡು
ತ್ತಾಳೆ. ನೋಡಿದ ಮರು ದಿನವೇ ಕಾಶಮ್ಮ ಲಿಂಗರಾಜನನ್ನು ಅವನ ತೋಟದ ಮನೆಯಲ್ಲಿ ಬೇಟಿಯಾಗಿ ಅವನನ್ನು ಬಿಗಿದಪ್ಪಿ ಅಳುತ್ತಾಳೆ. ಆದರೆ ಇವೆಲ್ಲ ಸನ್ನಿವೇಶ ಯಾರಿಗೂ ಗೊತ್ತಾ
ಗುವದಿಲ್ಲ. ಅದಾದ ಮರುದಿನವೇ ಕಾಶಮ್ಮ ಸೋಲ್ಲಾಪುರಕ್ಕೆ ಹೋಗುತ್ತಾಳೆ.
ಕಾಶಮ್ಮ ಸೋಲ್ಲಾಪುರಕ್ಕೆ ಹೋದನಂತರ ಕೆಲವು ವಾರಗಳ ನಂತರ ಲಿಂಗರಾಜು ಅಲ್ಲಿಗೆ ಬರುತ್ತಾನೆ. ಲಿಂಗರಾಜನಿಗೆ ಈ ಮೊದಲೆ ಬೇರೆ ಹುಡುಗಿಯೊಂದಿಗೆ ವಿವಾಹ ವಾಗಿರುತ್ತದೆ. ಆದರು ಕೂಡಾ ಕಾಶಮ್ಮಳೆ ಬೇಕೆಂದು ಮಾರ್ತಾಂಡನಲ್ಲಿ ಕೇಳಿಕೊಳ್ಳುತ್ತಾನೆ. ಆದರೆ ಏನು ಹೇಳದೆ ಅಸಹಾಯಕ ಸ್ಥಿತಿಯಲ್ಲಿರುವ ಮಾರ್ತಾಂಡನಿಗೆ ಹೇಳಿ ಕಾಶಮ್ಮ ಮತ್ತು ಲಿಂಗರಾಜ ಇಬ್ಬರು ಶಿವಳ್ಳಿಗೆ ಬರುತ್ತಾರೆ. ಲಿಂಗರಾಜ ಗುಟ್ಟಾಗಿ ಕಾಶಮ್ಮಳನ್ನು ಅವನ ತೋಟದ ಮನೆಯಲ್ಲಿಡುತ್ತಾನೆ. ಅಲ್ಲಿಯೆ ಅವಳೊಂದಿಗೆ ಸಂಸಾರ ನಡೆಸುತ್ತಾನೆ.
ಈ ಸುದ್ದಿ ಬರಸಿಡಿಲಿನಂತೆ ಮಲ್ಲಪ್ಪನ ಕುಟುಂಬಕ್ಕೆ ಬಂದೆರಗುತ್ತದೆ. ಸಿದ್ದಿ ಇಡಿ ಕುಟುಂಬವನ್ನೆ ತಲ್ಲಣ ಮಾಡುತ್ತದೆ. ಮನೆಯಲ್ಲಿ ದು:ಖದ ಕಟ್ಟೆಯೆ ಒಡೆದು ಹೋಗುತ್ತದೆ. ಮಲ್ಲಪ್ಪನಿಗಂತೂ ಎದೆ ಗುಂಡಿಗೆ ಒಡೆದು ಹೋಗುತ್ತದೆ. ಇದೇ ವಿಚಾರದಲ್ಲಿ ಮಲ್ಲಪ್ಪ ಚಿಂತೆಮಾಡುತ್ತಾ ತೋಟದಕಡೆ ತಿರುಗಾಡಿಕೊಂಡು ಬರಲು ಹೋಗಿ ಅಲ್ಲಿಯೇ ಕುಳಿತು ಸಿಂದಿಯನ್ನು ಕುಡಿಯುತ್ತಾನೆ. ಸಿಂದಿ ಕುಡಿದು ಮನೆಗೆ ಬರಲು ಸಿದ್ದನಾದಾಗ ತೆಲೆತಿರುಗಿದಂತಾಗುತ್ತದೆ. ಆಗೆಯೇ ಹಳ್ಳ ದಾಟುವಾಗ ಹಳ್ಳದ ರಭಸಕ್ಕೆ ಸಿಕ್ಕು ಮಲ್ಲಪ್ಪ ಅಸುನೀಗುತ್ತಾನೆ.
ಕಾಶಮ್ಮಳ ದು:ಖದಲ್ಲೆ ನೊಂದು ಬೆಂದಿರುವ ಮಲ್ಲಪ್ಪನ ಕುಟುಂಬಕ್ಕೆ ಮಲ್ಲಪ್ಪನ ಸಾವು ಈ ಕುಟುಂಬಕ್ಕೆ ದು:ಖ ತಡೆದುಕೊಳ್ಳುವ ಶಕ್ತಿ ಕೊಡಲಿಲ್ಲ. ಆ ದೇವರು ಕಲ್ಯಾಣಿ ಬೆಳ್ಳಿಯರ ಸುಖದ ಸಂಸಾರ ನೋಡವ ಮೊದಲೆ ಮಲ್ಲಪ್ಪನ ಸಾವು ಮನೆಯವರನ್ನು ಕಾದತೊಡಗಿತು. ಇದರ ನೆನಪಲ್ಲೆ ಮಲ್ಲವ್ವ ಹಾಸಿಗೆ ಹಿಡಿದು ದಿನಗಳನ್ನು ಎಣಿಸತೊಡಗಿದಳು. ದೆವ್ವ ಪಿಶಾಚಿಗಳು ಬಡಿವೆ ಎಂಬ ಭ್ರಾಂತಿಯಿಂದ ಮಲ್ಲವ್ವ ಚಿಂತೆ ಮಾಡತೊಡಗಿದಳು. ಮಲ್ಲವ್ವ ದಿನೆ ದಿನೆ ಕೃಶಳಾಗ ತೊಡಗಿದಳು. ಮೊದಲು ಸಂತೋಷ ಸಂಭ್ರಮದಿಂದ ತುಂಬಿ ತುಳುಕುತಿದ್ದ ಮನೆ ಬರಿದಾಯಿತು. ಬರಿ ನೋವು ದು:ಖ ತುಂಬಿದ ಮನೆ ಬಣಗುಡತೊಡಗಿತು.
ಕಲ್ಯಾಣಿ ತನ್ನ ಅಪ್ಪ ಮಲ್ಲಪ್ಪ ಸತ್ತ ನಂತರ ಜಮಾದಾರಕೆಯನ್ನು ಬಿಡಬೇಕೆಂದು ನಿರ್ಧರಿಸಿ ಆಫೀಸಿಗೆ ಹೋಗಿ ಜಮಾದಾರತನವನ್ನು ಬೇಡವೆಂದು ಸಹಿ ಮಾಡಿದ ಒಕ್ಕಲುತನ ಮಾಡಬೇಕೆಂದು ತಿರ್ಮಾನಿಸಿದ. ಸರಕಾರ ಉಂಬಳಿಯಾಗಿ ಕೊಟ್ಟ ಜಮೀನು ಮರಳಿ ಪಡೆದುಕೊಂಡಿತು. ಕಲ್ಯಾಣಿ ತೋಟದಲ್ಲೆ ದುಡಿಯುವೆನೆಂದು ತಿರ್ಮಾನಿಸಿದ ಪತರುನು ಸಹ ಮೊದಲೆ ಕೆಲೆಸ ಮಾಡಲು ತೋಟದ ಮನೆಯಲ್ಲಿಯೆ ಉಳಿದಳು.
ಕಲ್ಯಾಣಿ ಒಂದು ದಿನ ಸಿಂದಿ ಅಂಗಡಿ ಮುಂದೆ ಕುಂತು ಕುಡಿಯುತ್ತಿರುವಾಗ ಅಲ್ಲಿದ್ದ ಒಬ್ಬ ಕಾಶಮ್ಮಳ ಬಗ್ಗೆ ಅಸಡ್ಡೆಯಾಗಿ ಮಾತನಾಡುತ್ತಾನೆ. ಸಿಟ್ಟಿಗೆದ್ದ ಕಲ್ಯಾಣಿ ಜೋರಾಗಿ ಅವನಿಗೆ ಒದ್ದಾಗ ಬಿದ್ದು ತಲೆ ಕಲ್ಲಿಗೆ ಬಡಿದಾಗ ಅವನು ಅಸುನೀಗುತ್ತಾನೆ. ಪೋಲಿಸರು ಬಂದು ಕಲ್ಯಾಣಿಯನ್ನು ಜೈಲಿಗೆ ಹಾಕುತ್ತಾರೆ. ಕೋರ್ಟನಲ್ಲಿ ಕಲ್ಯಾಣಿಗೆ ೧೪ ವರ್ಷ ಜೈಲುವಾಸವಾಗುತ್ತದೆ. ಅದರ ನೋವಲ್ಲೆ ಮಲ್ಲವ್ವ ಹಾಸಿಗೆ ಹಿಡಿಯುತ್ತಾಳೆ. ಜೈಲು ವಾಸ ಕಡಿಮೆ ಮಾಡಲು ವಕೀಲನನ್ನು ನೆಮಿಸುತ್ತಾಳೆ. ದುಡ್ಡಿಗಾಗಿ ಒಂದು ಹೊಲವನ್ನು ಮಾರುತ್ತಾಳೆ. ಆದರು ಪ್ರಯೋಜವಾಗುವದಿಲ್ಲ. ನಂತರ ತೋಟವನ್ನು ಮಾರಬೇಕೆಂದು ಬೆಳ್ಳಿ ನಿರ್ಧರಿಸುತ್ತಾಳೆ. ಆಗ ಕಾಶಮ್ಮ ತೋಟ ಮಾರುವದು ಬೇಡ ನಾನು ದುಡ್ಡು ಕೊಡುತ್ತೆನೆ ಎಂದು ಹೇಳಿ ದುಡ್ಡು ಕೊಡುತ್ತಾಳೆ.
ಇಂಥ ದು:ಖದ ನಡುವೆ ಅಂದರೆ ಕಲ್ಯಾಣಿಯು ಜೈಲಿಗೆ ಹೋದ ನಂತರ ಬೆಳ್ಳಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಮಲ್ಲವ್ವ ಮೊಮ್ಮಗನೊಂದಿಗೆ ಸಂತೋಷವಾಗಿ ಇರುತ್ತಾಳೆ. ಆದರೆ ನಡುವೆ ಅನಾರೋಗ್ಯದ ಕಾರಣ ಅಸುನಿಗುತ್ತಾಳೆ.
ಇತ್ತ ಕಲ್ಯಾಣಿ ಜೈಲಿನಲ್ಲಿ ಹಳೆಯ ನೆನಪುಗಳನ್ನು ಕೆದಕಿ ದು:ಖದಿಂದ ಬಳಲುತ್ತಿರುತ್ತಾನೆ. ಅವನ ಪ್ರಾಮಾಣಿಕತೆ ಮತ್ತು ನಿಷ್ಟೆಗೆ ೮ ವರ್ಷಗಳ ನಂತರ ಅವನನ್ನು ೧೨ ವರ್ಷಕ್ಕೆ ಬಿಡುಗಡೆ ಮಾಡುವದೆಂದು ಜೈಲಿನ ಮುಖ್ಯ ಅಧಿಕಾರಿ ಹೇಳುತ್ತಾನೆ. ಇದರಿಂದ ಬೆಳ್ಳಿ ಅವರ ಅವ್ವ ಎಲ್ಲರಿಗೂ ಸ್ವಲ್ಪ ಸಮಾಧಾನವಾಗಿರುವಂತೆ ಸಂತೋಷವಾಗಿರುತ್ತಾರೆ.
ಬಹಳ ದಿನಗಳ ನಂತರ ಮಾರ್ತಾಂಡ ಶಿವಳ್ಳಿಗೆ ಬರುತ್ತಾನೆ. ಅವನು ಮೊದಲಿನಂತಿರದೆ ಗಿರಣಿ ಬಿಟ್ಟು ಸನ್ಯಾಸಿಯಾಗಿದ್ದ. ಖಾವಿ ಬಟ್ಟೆ ಉಟ್ಟು ಉದ್ದನೆಯ ಗಡ್ಡ ಬಿಟ್ಟು ಕಲ್ಯಾಣಿಯ ತೋಟಕ್ಕೆ ಬಂದ ಅಲ್ಲಿ ಪತರು ಕಾಶಮ್ಮಳನ್ನು ಕರೆಯಿಸಿದ. ಅಲ್ಲಿ ಅವರಿಬ್ಬರು ಕೆಲ ಹೊತ್ತು ಮಾತನಾಡಿದರು. ಕಾಶಮ್ಮಳನ್ನು ಮತ್ತೆ ಬಾ ಎಂದು ಕರೆಯುತ್ತಾನೆ ಆದರೆ ಅವಳು ಒಲ್ಲೆ ಎನ್ನುತ್ತಾಳೆ ಅಲ್ಲಿಂದ ಅವರು ಹೋಗುತ್ತಾರೆ ಆದರೆ ಮರುದಿನ ಮಾರ್ತಾಂಡ ಶವವಾಗಿ ಹಳ್ಳದ ದಂಡೆಯಲ್ಲಿ ಅವನು ಬಿದ್ದಿರುತ್ತಾನೆ.
ಈ ನಡುವೆ ಕಲ್ಯಾಣಿ ಜೈಲಿನಿಂದ ಬಿಡುಗಡೆಯಾಗಿ ಅವನು ಊರಿಗೆ ಬರುತ್ತಾನೆ. ಆದರೆ ಅವನ ಮಗ ಶಿವಮಲ್ಲು ಮಾತ್ರ ಅಪ್ಪನನ್ನು ಅಸಡ್ಡೆಯಿಂದ ನೋಡಿ ಕಲ್ಬುರ್ಗಿಯಲ್ಲೆ ಉಳಿದ ಕಲ್ಯಾಣಿಯು ಮನ ನೊಂದು ತಿರ್ಥಯಾತ್ರೆಗೆ ತೆರಳಲು ಬೆಳ್ಳಿ ಕಲ್ಯಾಣಿ ತಯಾರಾಗುತ್ತಾರೆ. ಎಲ್ಲರೂ ಬಿಳ್ಕೋಟ್ಟ ನಂತರ ಅವರು ತೆರಳುತ್ತಾರೆ. ಆದರೆ ಅವರು ತೀರ್ಥಯಾತ್ರೆ ಮುಗಿಸಿ ಬರುವಾಗ ಬಸ್ಸು ಅಪಘಾತಕ್ಕೀಡಾಗಿ ಬೆಳ್ಳಿ ಮತ್ತು ಕಲ್ಯಾಣಿ ಅವರು ಅಲ್ಲೆ ಅಸುನೀಗುತ್ತಾರೆ.
ಒಟ್ಟು ಈ ಕಾದಂಬರಿ ಕನ್ನಡದ ಶ್ರೇಷ್ಠ ಕೃತಿಗಳಲ್ಲಿ ಒಂದಾಗಿದೆ; ಕನ್ನಡಕ್ಕೆ ಗೀತಾ ನಾಗಭೂಷಣ ಅವರು ನೀಡಿದ ಅರ್ಥಪೂರ್ಣ ಕಾಣಿಕೆಯಾಗಿದೆ.
ಶರಣಬಸವ ಚಿಂಚೋಳಿ ಬಿ. ಎ. ೨
Thursday, July 29, 2010
Subscribe to:
Post Comments (Atom)
No comments:
Post a Comment