Wednesday, April 21, 2010

ತಾಳಿಕೋಟಿ ದ್ಯಾಮವ್ವ !

ತಾಳಿಕೋಟಿ ಎಂದಾಕ್ಷಣ ನೆನೆಪಿಗೆ ಬರುವುದು ರಕ್ಕಸ ತಂಗಡಗಿಯ ಯುದ್ಧ ! ಆದರೆ ನಾನು ಹೇಳುತ್ತಿರುವುದು ಅದರ ಬಗ್ಗೆ ಅಲ್ಲ . ತಾಳಿಕೋಟಿಯ ಕೋಟೆಗೂ ದ್ಯಾಮವ್ವನಿಗೂ ಸಂಬಂಧಿಸಿದಂತೆ ಒಂದು ಐತಿಹ್ಯವಿದೆ. ಆ ಐತಿಹ್ಯದಂತೆ ತಾಳಿ
ಕೋಟಿಗೆ ಈ ಹೆಸರು ಬರಲು ದ್ಯಾಮವ್ವ ತನ್ನ ತಾಳಿಯನ್ನು ಬಡವರಿಗೆ ಆಪ
ತ್ಕಾಲದಲ್ಲಿ ಕೊಡುತ್ತಿದ್ದಳಂತೆ !ಆದ್ದರಿಂದಲೆ ಈ ಹೆಸರು ಬಂದಿದೆಯಂತೆ. ಇಲ್ಲಿಯ ಕೋಟೆ ತಾಳಿಯ ಆಕಾರದಲ್ಲಿರುವುದರಿಂದ ಈ ಹೆಸರು ಬಂದಿದೆ ಎಂತಲೂ ಹೇಳುತ್ತಾರೆ.


ಅವಸಾನದ ಅಂಚಿನಲ್ಲಿರುವ ತಾಳಿಕೋಟೆಯ ಕೋಟೆ

ಈಗ ಇಲ್ಲಿ ಅನೇಕ ಐತಿಹಾಸಿಕ ಅವಶೇಷಗಳಿವೆ. ಕೋಟೆ, ಬತೇರಿ, ವೀರ ಗಲ್ಲು,ಭೈರವನ ಶಿಲ್ಪ, ಶಾಸನ,ಭಾವಿ, ಸ್ಥಂಭಗಳು ಒಂದೇ ಎರಡೇ ಲೆಕ್ಕವಿಲ್ಲ ! ಆದರೆ ಅವೆಲ್ಲವೂ ಇಂದು  ಹಾಳಾಗುತ್ತಲಿವೆ. ಕಲ್ಯಾಣ ಚಲುಕ್ಯರ ಕಾಲದ ಸಿದ್ಧ
ಲಿಂಗೇಶ್ವರ ಮತ್ತು ರಾಮಲಿಂಗೇಶ್ವರ ದೇವಾಲಯಗಳು ಹಾಳಾಗುತ್ತಲಿವೆ.
 
 
ತಾಳಿಕೋಟಿಯ ಕೋಟೆಯು ಗಟ್ಟಿಯಾಗಿ ನಿಲ್ಲದಿದ್ದಾಗ ಬಲಿ ಕೊಡಲು ನಿರ್ಧರಿಸಿ
ದರು. ಅಮವಾಸ್ಯೆಯ ದಿನ ಮೂಡಲ ದಿಕ್ಕಿನಿಂದ ಬಂದವರನ್ನು ಬಲಿಕೊಟ್ಟರೆ ಕೋಟೆ ನಿಲ್ಲುವದೆಂದು ಜ್ಯೋತಿಷಿಗಳು ಹೇಳಿದರು. ದ್ಯಾಮವ್ವನ ತಮ್ಮ ಸುಲಿಯಲ್ಲ ಅಮವಾಸ್ಯೆಯ ದಿನವೇ ಮೂಡಲ ದಿಕ್ಕಿನ ತನ್ನ ಊರಿನಿಂದ ಅಕ್ಕನನ್ನು ನೋಡಲು ಬಂದನು. ಇದನ್ನು ತಿಳಿದ ರಾಜಸೇವಕರು ಸುಲಿಯಲ್ಲನನ್ನು ಬಲಿಕೊಡಲು ಕರೆ
ದೊಯ್ದರು. ಅಕ್ಕ ದ್ಯಾಮವ್ವ ತನ್ನ ತಮ್ಮನೊಂದಿಗೆ ತಾನೂ ಬಲಿಯಾದಳು. ಆದರೆ ತಮ್ಮ ನ ಸಲುವಾಗಿ ಕೋಟೆಗೆ ಬಲಿಯಾದ ದ್ಯಾಮವ್ವ ಜನಪದರ ಬಾಯಲ್ಲಿ ಅಮರಳಾಗಿದ್ದಾಳೆ.
   ಕೋಟೆಯ ಹತ್ತಿರವಿರುವ ದ್ಯಾಮವ್ವನ ಗುಡಿ

 
ದಿನನಿತ್ಯ ದ್ಯಾಮವ್ವ ನಸುಕಿನಲ್ಲಿಯೇ ಎದ್ದು ಬೀಸುತ್ತಾಳಂತೆ. ಬೀಸುವ ಸದ್ದು ಕೇಳಿದ ಕೂಡಲೆ ಅತ್ತೆಯರು ಸೊಸೆಯಂದಿರಿಗೆ “ ಏ ಏಳ್ರೆ , ದ್ಯಾಮವ್ವ ಆಗಲೆ ಎದ್ದು ಬೀಸಾಕ ಹತ್ಯಾಳ ” ಎಂದು ಸೊಸೆಯಂದಿರನ್ನು ಎಬ್ಬಿಸುತಿದ್ದರಂತೆ. ಸೊಸೆ
ಯಂದಿರು “ ಈ ದ್ಯಾಮವ್ವ ನಮಗ ಪೀಡಾ ಆಗ್ಯಾಳ ” ಎಂದು ಬಯ್ಯುತ್ತಿದ್ದರಂತೆ. ಹೀಗೆ ದ್ಯಾಮವ್ವ ಜನಜನಿತವಾಗಿದ್ದಾಳೆ.

ದ್ಯಾಮವ್ವ ಬೀಸುತ್ತಿದ್ದಳೆಂದು  ಹೇಳಲಾಗುವ ಬೀಸುವ ಕಲ್ಲು
 
ಈಗಲೂ ದ್ಯಾಮವ್ವ ಬೀಸುವ ದೊಡ್ಡ ಬೀಸುವಕಲ್ಲು ಶಿವಭವಾನಿ ದೇವಸ್ಥಾನದ ಹತ್ತಿರವಿದೆ. ದ್ವಾರ ಬಾಗಿಲದ ಹತ್ತಿರವಿರುವ ಕಿಂಡಿಗೆ ದ್ಯಾಮವ್ವ್ನ ಕಿಂಡಿ ಎಂದು ಹೇಳುತ್ತಾರೆ. ಅಲ್ಲಿಯೆ ಗೋಡೆಯಲ್ಲಿರುವ ಶಿಲ್ಪದ ಎರಡು ಮೂರ್ತಿಗಳಿಗೆ ದ್ಯಾಮವ್ವ ಮತ್ತು ಸುಲಿಯಲ್ಲ ಎಂದು ಕರೆಯುತ್ತಾರೆ. ಕಿಂಡಿಯಲ್ಲಿರುವ ಶಿಲ್ಪಕ್ಕೆ ದೀಪ ಹಚ್ಚಿ ಪೂಜೆಮಾದುವುದನ್ನು ಈಗಲೂ ಕಾಣಬಹುದಾಗಿದೆ. ದ್ವಾರ ಬಾಗಿಲದ ಹತ್ತಿರವೇ ಇರುವ ಚಿಕ್ಕಗುಡಿಯಲ್ಲಿ ಒಂದು ವೀರಗಲ್ಲು ಇದೆ. ಅದರಲ್ಲಿಯ ಶಿಲ್ಪ್ಗಗಳಿಗೆ ದ್ಯಾಮ
ವ್ವನ ಶಿಲ್ಪವೆಂದು ಹೇಳುತ್ತಾರೆ.
  ದ್ಯಾಮವ್ವನ ಕಿಂಡಿ ಇಲ್ಲಿಯೆ ಕೆಳಗೆ ಸಪ್ತ ಮಾತೃಕೆ ಶಿಲ್ಪವಿದೆ.

 ದ್ಯಾಮವ್ವ ತನ್ನ ಗಂಡನ ಮನೆಯವರ ಹೆಣ್ಣುಸಂತಾನಕ್ಕೆ ನನ್ನಂತೆ ಕಷ್ಟ ಬರಲಿ ಎಂದು ಶಾಪ ಕೊಟ್ತಿರುವಳಂತೆ.ಅಲ್ಲದೆ ತನ್ನ ತಮ್ಮ ಬಂದದ್ದನ್ನು ರಾಜದೂತರಿಗೆ ಚಾಡಿಹೇಳಿದ ಮಗ್ಗುಅಲ ಮನೆಯವರಿಗೂ ಶಾಪ ಕೊಟ್ತಿರುವಳಂತೆ. ಈಗಲೂ ಅವರಿಗೆ ಕಷ್ಟ ತಪ್ಪಿಲ್ಲವಂತೆ.
 
 
ಹೀಗೆ ಅನೇಕ ಕತೆಗಳು ದ್ಯಾಮವ್ವನ ಐತಿಹ್ಯದ ವ್ಯಕ್ತಿತ್ವವನ್ನು ಬಿಚ್ಚಿಡುತ್ತವೆ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದರೆ ಬೀಸುವಕಲ್ಲು ಮದ್ದು ಆರೆಯುವ ಕಲ್ಲಾಗಿರಬಹು
ದೆಂದು ಗೊತ್ತಾಗುತ್ತದೆ. ಅದೇ ರೀತಿ ಸಪ್ತ ಮಾತೃಕೆಯ ಶಿಲ್ಪವನ್ನು ಅಕ್ಕ ತಮ್ಮರ ಶಿಲ್ಪವೆಂದು ಕರೆಯುವುದು ಗೊತ್ತಾಗುತ್ತದೆ. ಒಟ್ಟು ದ್ಯಾಮವ್ವನ ಬಲಿದಾನವನ್ನು ಜನಪದರು ಅತಿ ಶೃದ್ಧೆಯಿಂದ, ಗೌರವದಿಂದ ಕಂಡಿದ್ದಾರೆಂಬುದು ಗೊತ್ತಾಗುತ್ತದೆ.




 ಕಾವ್ಯ ಕಾರಜೋಳ ಬಿ. ಎ.  ೧

Tuesday, April 20, 2010

೭೬ನೆಯ ಕನ್ನಡ ಸಾಹಿತ್ಯ ಸಮ್ಮೇಳನ - ಗದಗ







೭೬ ನೆಯ ಸಮ್ಮೇಳನದ ಅಧ್ಯಕ್ಷೆ ಗೀತಾ ನಾಗಭೂಷಣ ಒಡಲಾಳದ ಮಾತುಗಳು



ತರಗತಿಯಲ್ಲಿ ಆಧುನಿಕ ಕವಿಗಳ ಕವಿತೆಗಳನ್ನು ಲೇಖಕರ ಕಾದಂಬರಿ, ಸಣ್ಣಕತೆ,ಪ್ರಬಂಧಗಳನ್ನು ಓದಿ ಪುಳಕಗೊಂಡಿದ್ದೇನೆ . ಅಂತಹ  ಸಾಹಿತಿಗಳನ್ನು ಪ್ರತ್ಯಕ್ಷವಾಗಿ ನೋಡುವ, ಅವರ ಮಾತುಗಳನ್ನು ಕೇಳುವ, ಅವರೊಂದಿಗೆ ಮಾತನಾದುವ ಅವಕಾಶ ಸಿಕ್ಕರೆ ಅದಕ್ಕಿಂತ ಹೆಚ್ಚಿನ ಭಾಗ್ಯವಿನ್ನೇನು ಬೇಕು ! ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳನ್ನು ಆಲಿಸುವ  ಮತ್ತು ಸಾಹಿತಿಗಳನ್ನು ಮಾತನಾಡಿಸುವ ಭಾಗ್ಯ ಸಿಗುತ್ತದೆಂದೆ ಹೋಗಲು ನಿರ್ಧರಿಸಿದೆ. ಪ್ರೊ. ಚಂದ್ರಗೌಡ ಕುಲಕರ್ಣಿಯವರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ದೊರೆತ ಕೂಡಲೇ ಉತ್ಸುಕನಾದೆ.

ನೆರೆ ಬರದ ಕಪ್ಪು ನೆರಳಿನಲ್ಲಿಯೂ ಗದಗ ಸಮ್ಮೇಳನಕ್ಕಾಗಿ ಸಂಭ್ರಮದಿಂದ ಸಿದ್ಧಗೊಂಡಿತ್ತು. ಅಧ್ಯಕ್ಷರ ಮೆರವಣಿಗೆ ಮತ್ತು ಉದ್ಘಾಟನೆ ಸಮಾರಂಭದಷ್ಟೊತ್ತಿಗೆ ಕನ್ನಡಿಗರ ಅಭಿಮಾನ ತಾರಕಕ್ಕೇರಿತ್ತು !

ಮೂರು ದಿನಗಳಲ್ಲಿ ಎಷ್ಟೊಂದು ಗೋಷ್ಠಿಗಳು,ಎಂತೆಂತಹ ಸಾಹಿತಿಗಳು, ಎಂತೆಂತಹ ಆಸಕ್ತ ಓದುಗರು, ಸಾಹಿತ್ಯಾಭಿಮಾನಿಗಳು... ಅಭೂತಪೂರ್ವ ಎನಿಸುವ ಮನರಂಜನೆ ಕಾರ್ಯಕ್ರಮಗಳು,ರಾಜ್ಯದ ಪ್ರಮುಖ ಪುಸ್ತಕ ಮಳಿಗೆಗಳು..  ಸಮೀಪದ ಪ್ರವಾಸಿ ತಾಣಗಳು... ನಮ್ಮೊಂದಿಗೆ ಊಟ ಮಾಡುವ ಸಾಹಿತಿ ದಿಗ್ಗಜರು,  ಪತ್ರಿಕೆ, ಟಿ.ವಿ. ರೇಡಿಯೋ ಮಾಧ್ಯಮದವರ ಅರ್ಥಪೂರ್ಣ ಪ್ರಸಾರಗಳು.... ಎಲ್ಲವನ್ನು ಸವಿಯುವ ಅವಕಾಶ ಸಿಕ್ಕದ್ದು ಈಗಲೂ ಮನಸ್ಸಿನಲ್ಲಿ ಹಚ್ಚಹಸಿರಾಗಿದೆ.

ಅಂತೆಯೇ ಈ ಸಮ್ಮೇಳನ ಕುರಿತು ೯೪ ಪುಟಗಳ  ‘ಅವಲೋಕನ’ ವನ್ನು ರಚಿಸಲು ಸಾಧ್ಯವಾಯಿತು. ಈ ಅವಲೋಕನವನ್ನು ಪ್ರಸಿದ್ಧ ಜಾನಪದ  ತಜ್ಞರಾದ ಶಂಭು ಬಳಿಗಾರ ಅವರು ಸ್ನೇಹ ಸಮ್ಮೇಳನದಲ್ಲಿ ಬಿಡುಗಡೆ ಮಾಡಿ ತುಂಬು ಹೃದಯದಿಂದ ಶುಭ ಹಾರೈಸಿದ್ದನ್ನು ನಾನೆಂದೂ ಮರೆಯುವದಿಲ್ಲ !
ಒಟ್ಟು ಈ ಸಮ್ಮೇಳನ ನನ್ನ ಮೇಲೆ ಅಗಾಧ ಪರಿಣಾಮವನ್ನು ಬೀರಿದೆ. ನನ್ನ ಅನುಭವಗಳನ್ನು ಬರವಣಿಗೆ ರೂಪದಲ್ಲಿ  ಅಭಿವ್ಯಕ್ತ ಮಾಡುವ ಶಕ್ತಿ ನೀಡಿದೆ.

ಶರಣಬಸವ ಚಿಂಚೋಳಿ ಬಿ. ಎ. ೧


Sunday, April 18, 2010

ನಮ್ಮೂರು - ಬೊಮ್ಮನಹಳ್ಳಿ








                                           (ನಮ್ಮೂರ ಐತಿಹಾಸಿಕತೆಯನ್ನು ಸಾರುವ ಹುಡೆ.)


ನಮ್ಮೂರು : ಕೇಳಿದ್ದು ,ಕಂಡದ್ದು !

ನಮ್ಮೂರು ಬೊಮ್ಮನಹಳ್ಳಿ ! ಹಾಂ! ತಡೆಯಿರಿ ಇದು ಕಿಂದರಜೋಗಿಯ ಬೊಮ್ಮನಹಳ್ಳಿಯಲ್ಲ !ಇದು ವಿಜಾಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾನೂರುಮನೆಗಳ ಚಿಕ್ಕಹಳ್ಳಿ.ಪುರಾತನವಾದ ಈ ಊರಿನಲ್ಲಿ ಅನೇಕ ಹುಡೆಗಳಿವೆ; ಹಾಳುಬಿದ್ದ ದೇವಾಲಯಗಳಿವೆ; ದೇವತಾ ವಿಗ್ರಹಗಳಿವೆ; ಮಾಸ್ತಿಕಲ್ಲು ಇವೆ; ನಿಗೂಢ ಭಾವಿಗಳಿವೆ. ಇತಿಹಾಸ ಆಸಕ್ತರನ್ನು ಕೈಮಾಡಿ ಕರೆಯುತ್ತವೆ.



ವ್ಯಾಸನ ತೋಳು ಎಂದು ಕರೆಯಲ್ಪಡುವ ಮಾಸ್ತಿ ಕಲ್ಲು !






ಅತಿ ಪುರಾತನವಾದ ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯವೆಂದರೆ ಸಂಗಮ
ನಾಥನದು. ಈಶ್ವರ ಲಿಂಗ ಮತ್ತು ಬಸವಣ್ಣನ ಮೂರ್ತಿಗಳಿವೆ. ಕುಸುರಿಕೆತ್ತನೆ
ಯಿಲ್ಲದಿದ್ದರೂ ಗಮನಸೆಳೆಯುವ ಸ್ಥಂಬಗಳಿವೆ. ಈಗ ಆರ್ಧಕ್ಕಿಂತಲೂ ಹೆಚ್ಚು ನಾಶ
ವಾಗಿ ಕಣ್ಣಕಪ್ಪಡಿಗಳ ಆವಾಸಸ್ಥಾನವಾಗಿರುವ ಈ ದೇವಾಲಯದ ಗರ್ಭಗುಡಿಯ ಮುಂದೆ ಅನೇಕ ಶಿಥಿಲ ಶಿಲ್ಪಗಳಿವೆ. ಅವುಗಳಲ್ಲಿ ಭೈರವನ ವಿಗ್ರಹ ಅತ್ಯಂತ ಸುಂದರವಾಗಿದೆ. ವ್ಯಾಸನತೋಳು ಎಂದು ನಮ್ಮೂರ ಜನರಿಂದ ಕರೆಯಲ್ಪಡುವ ಮಾಸ್ತಿಕಲ್ಲು ಇದೆ. ಈ ದೇವಾಲಯದ ಅತ್ಯಂತ ರೋಚಕ ಸಂಗತಿ ಎಂದರೆ ಗರ್ಭ
ಗುಡಿಯಲ್ಲಿಯೇ ಇರುವ ಭೂಗತ ಭಾವಿ ! ಇಲ್ಲಿ ಬಟ್ಟಲನ್ನು ತೇಲಿಬಿಟ್ಟರೆ ಅದು ೫ ನೂರು ಮೀ. ದೂರದಲ್ಲಿರುವ ಸಿದ್ಧೇಶ್ವರ ಗುಡಿಯ ಮುಂದಿನ ಸಿಡಿಲ ಭಾವಿಯಲ್ಲಿ ಕಾಣುತ್ತದಂತೆ ! ಇಲ್ಲಿರುವ ಇನ್ನೊಂದು ಸುಂದರ ಮೂರ್ತಿ ಒಡೆದು ಎರಡುಭಾಗ
ವಾಗಿದೆ.ಎರಡು ಮೂರು ನಾಗರಕಲ್ಲುಗಳಿವೆ.

ಬಾಣತಿ ಕಲ್ಲು ಎಂದು ಪೂಜಿಸಲ್ಪಡುವ ಗಜಲಕ್ಶ್ಮೀ ಶಿಲ್ಪ


೪೦ ಫೂಟು ಎತ್ತರವಿರುವ ಎರಡು ಹುಡೆಗಳಿವೆ. ಸಂಗಮನಾಥ ಗುಡಿಯ ಹತ್ತಿರ
ವಿರುವ ಹುಡೆದ ಮಧ್ಯದಲ್ಲಿಯೆ ಚಿಕ್ಕಲಕ್ಷ್ಮೀ ಗುಡಿಯಿದೆ. ಇಲ್ಲಿಂದ ೨ ನೂರು ಫೂಟು ದೂರದಲ್ಲಿ ಪಾಲಕಮ್ಮ ನ ಚಿಕ್ಕ ದೇವಸ್ಥಾನವಿದೆ. ಅದರ ಮುಂದೆ ಇರುವ ಗಜಲಕ್ಷ್ಮೀ ಶಿಲ್ಪಕ್ಕೆ ಬಾಣಂತಿ ಕಲ್ಲೆಂದು ಕರೆಯುತ್ತಾರೆ.ಈಗಲೂ ಹೆರಿಗೆತಡ
ವಾದರೆ ಈ ಕಲ್ಲನ್ನು ಬೋರಲು ಹಾಕುತ್ತಾರೆ. ಸುರಕ್ಷಿತ ಹೆರಿಗೆಯಾದ ಅನಂತರ ಮತ್ತೆ ಸಮಸ್ಥಿತಿಯಲ್ಲಿ ನಿಲ್ಲಿಸಿ ಪೂಜೆ ಸಲ್ಲಿಸುತ್ತಾರೆ



ಸಂಗಮನಾಥನ ದೇವಾಲಯ- ಒಳಭಾಗದಲ್ಲಿರುವ ಸ್ಥಂಭಗಳು

ಊರ ಹೊರಗೆ ಹಳ್ಳದ ಹತ್ತಿರ ಶಾಂತಲಿಂಗೇಶ್ವರ ಮಠ ಇದೆ. ಐವತ್ತು ವರ್ಷಗಳ ಹಿಂದೆ ಇಲ್ಲೊಬ್ಬ ಶರಣರು ಆಗಿಹೋಗಿದ್ದಾರೆ. ಬಸ್ ನಿಲುಗಡೆ ಹತ್ತಿರವೇ ಅಮಲೇ
ಶ್ವರ ಮಠವೂ ಇದೆ. ಗ್ರಾಮದೇವತೆಯ ಗುಡಿ ಒಕ್ಕಲಿಗರ ಭಕ್ತಿಗೆ ಸಾಕಾರ
ವಾಗಿದೆ. ಊರಿದ್ದಲ್ಲಿ ಹನುಮಪ್ಪ ಇರಲೇಬೇಕಲ್ಲ ! ಹನುಮಪ್ಪನ ದೇವಸ್ಥಾನ ನಮ್ಮ ತಾಳಿಕೋಟಿ ಶ್ರೀ ಖಾಸ್ಗತೇಶ ಕಲಾ-ವಾಣಿಜ್ಯ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾಯೋಜನೆಯ ವಾರ್ಷಿಕ ಶಿಬಿರದ ಸಂದರ್ಭದಲ್ಲಿ ಪುನ
ರುಜ್ಜೀವನಗೊಂಡಿದೆ. ಬಸ್ ನಿಲುಗಡೆ ಶೆಲ್ಟರ್ ಸಹ ಶಿಬಿರದ ವಿದ್ಯಾರ್ಥಿಗಳ ಶ್ರಮದಾನದಿಂದಲೇ ನಿರ್ಮಾಣವಾಗಿದೆ. 


ಇನ್ನು ನಮ್ಮೂರಿನ ಜನಪದದ ಬಗ್ಗೆ ಹೇಳಲೇಬೇಕು. ಎಲ್ಲಮ್ಮನ ಬಯಲಾಟ ಮೇಳ ನಮ್ಮೂರಲ್ಲಿತ್ತು. ಈಗ ಇಲ್ಲ. ಭಜನಾ ಮೇಳವಿದೆ.ಜನಪದ ಹಾಡುಗಾರ್ತಿ
ಯರೂ ನಮ್ಮೂರಲ್ಲಿದ್ದಾರೆ.


ಇದಿಷ್ಟು ನಮ್ಮೂರಿನ ಸಾಂಸ್ಕೃತಿಕ ಲೋಕದ ಸಂಕ್ಷಿಪ್ತ ಪರಿಚಯ.


  

ಶಿವರಾಜ ಗುಂಡಲಗೇರಿ ಬಿ.ಎ.  ೨