Wednesday, April 21, 2010

ತಾಳಿಕೋಟಿ ದ್ಯಾಮವ್ವ !

ತಾಳಿಕೋಟಿ ಎಂದಾಕ್ಷಣ ನೆನೆಪಿಗೆ ಬರುವುದು ರಕ್ಕಸ ತಂಗಡಗಿಯ ಯುದ್ಧ ! ಆದರೆ ನಾನು ಹೇಳುತ್ತಿರುವುದು ಅದರ ಬಗ್ಗೆ ಅಲ್ಲ . ತಾಳಿಕೋಟಿಯ ಕೋಟೆಗೂ ದ್ಯಾಮವ್ವನಿಗೂ ಸಂಬಂಧಿಸಿದಂತೆ ಒಂದು ಐತಿಹ್ಯವಿದೆ. ಆ ಐತಿಹ್ಯದಂತೆ ತಾಳಿ
ಕೋಟಿಗೆ ಈ ಹೆಸರು ಬರಲು ದ್ಯಾಮವ್ವ ತನ್ನ ತಾಳಿಯನ್ನು ಬಡವರಿಗೆ ಆಪ
ತ್ಕಾಲದಲ್ಲಿ ಕೊಡುತ್ತಿದ್ದಳಂತೆ !ಆದ್ದರಿಂದಲೆ ಈ ಹೆಸರು ಬಂದಿದೆಯಂತೆ. ಇಲ್ಲಿಯ ಕೋಟೆ ತಾಳಿಯ ಆಕಾರದಲ್ಲಿರುವುದರಿಂದ ಈ ಹೆಸರು ಬಂದಿದೆ ಎಂತಲೂ ಹೇಳುತ್ತಾರೆ.


ಅವಸಾನದ ಅಂಚಿನಲ್ಲಿರುವ ತಾಳಿಕೋಟೆಯ ಕೋಟೆ

ಈಗ ಇಲ್ಲಿ ಅನೇಕ ಐತಿಹಾಸಿಕ ಅವಶೇಷಗಳಿವೆ. ಕೋಟೆ, ಬತೇರಿ, ವೀರ ಗಲ್ಲು,ಭೈರವನ ಶಿಲ್ಪ, ಶಾಸನ,ಭಾವಿ, ಸ್ಥಂಭಗಳು ಒಂದೇ ಎರಡೇ ಲೆಕ್ಕವಿಲ್ಲ ! ಆದರೆ ಅವೆಲ್ಲವೂ ಇಂದು  ಹಾಳಾಗುತ್ತಲಿವೆ. ಕಲ್ಯಾಣ ಚಲುಕ್ಯರ ಕಾಲದ ಸಿದ್ಧ
ಲಿಂಗೇಶ್ವರ ಮತ್ತು ರಾಮಲಿಂಗೇಶ್ವರ ದೇವಾಲಯಗಳು ಹಾಳಾಗುತ್ತಲಿವೆ.
 
 
ತಾಳಿಕೋಟಿಯ ಕೋಟೆಯು ಗಟ್ಟಿಯಾಗಿ ನಿಲ್ಲದಿದ್ದಾಗ ಬಲಿ ಕೊಡಲು ನಿರ್ಧರಿಸಿ
ದರು. ಅಮವಾಸ್ಯೆಯ ದಿನ ಮೂಡಲ ದಿಕ್ಕಿನಿಂದ ಬಂದವರನ್ನು ಬಲಿಕೊಟ್ಟರೆ ಕೋಟೆ ನಿಲ್ಲುವದೆಂದು ಜ್ಯೋತಿಷಿಗಳು ಹೇಳಿದರು. ದ್ಯಾಮವ್ವನ ತಮ್ಮ ಸುಲಿಯಲ್ಲ ಅಮವಾಸ್ಯೆಯ ದಿನವೇ ಮೂಡಲ ದಿಕ್ಕಿನ ತನ್ನ ಊರಿನಿಂದ ಅಕ್ಕನನ್ನು ನೋಡಲು ಬಂದನು. ಇದನ್ನು ತಿಳಿದ ರಾಜಸೇವಕರು ಸುಲಿಯಲ್ಲನನ್ನು ಬಲಿಕೊಡಲು ಕರೆ
ದೊಯ್ದರು. ಅಕ್ಕ ದ್ಯಾಮವ್ವ ತನ್ನ ತಮ್ಮನೊಂದಿಗೆ ತಾನೂ ಬಲಿಯಾದಳು. ಆದರೆ ತಮ್ಮ ನ ಸಲುವಾಗಿ ಕೋಟೆಗೆ ಬಲಿಯಾದ ದ್ಯಾಮವ್ವ ಜನಪದರ ಬಾಯಲ್ಲಿ ಅಮರಳಾಗಿದ್ದಾಳೆ.
   ಕೋಟೆಯ ಹತ್ತಿರವಿರುವ ದ್ಯಾಮವ್ವನ ಗುಡಿ

 
ದಿನನಿತ್ಯ ದ್ಯಾಮವ್ವ ನಸುಕಿನಲ್ಲಿಯೇ ಎದ್ದು ಬೀಸುತ್ತಾಳಂತೆ. ಬೀಸುವ ಸದ್ದು ಕೇಳಿದ ಕೂಡಲೆ ಅತ್ತೆಯರು ಸೊಸೆಯಂದಿರಿಗೆ “ ಏ ಏಳ್ರೆ , ದ್ಯಾಮವ್ವ ಆಗಲೆ ಎದ್ದು ಬೀಸಾಕ ಹತ್ಯಾಳ ” ಎಂದು ಸೊಸೆಯಂದಿರನ್ನು ಎಬ್ಬಿಸುತಿದ್ದರಂತೆ. ಸೊಸೆ
ಯಂದಿರು “ ಈ ದ್ಯಾಮವ್ವ ನಮಗ ಪೀಡಾ ಆಗ್ಯಾಳ ” ಎಂದು ಬಯ್ಯುತ್ತಿದ್ದರಂತೆ. ಹೀಗೆ ದ್ಯಾಮವ್ವ ಜನಜನಿತವಾಗಿದ್ದಾಳೆ.

ದ್ಯಾಮವ್ವ ಬೀಸುತ್ತಿದ್ದಳೆಂದು  ಹೇಳಲಾಗುವ ಬೀಸುವ ಕಲ್ಲು
 
ಈಗಲೂ ದ್ಯಾಮವ್ವ ಬೀಸುವ ದೊಡ್ಡ ಬೀಸುವಕಲ್ಲು ಶಿವಭವಾನಿ ದೇವಸ್ಥಾನದ ಹತ್ತಿರವಿದೆ. ದ್ವಾರ ಬಾಗಿಲದ ಹತ್ತಿರವಿರುವ ಕಿಂಡಿಗೆ ದ್ಯಾಮವ್ವ್ನ ಕಿಂಡಿ ಎಂದು ಹೇಳುತ್ತಾರೆ. ಅಲ್ಲಿಯೆ ಗೋಡೆಯಲ್ಲಿರುವ ಶಿಲ್ಪದ ಎರಡು ಮೂರ್ತಿಗಳಿಗೆ ದ್ಯಾಮವ್ವ ಮತ್ತು ಸುಲಿಯಲ್ಲ ಎಂದು ಕರೆಯುತ್ತಾರೆ. ಕಿಂಡಿಯಲ್ಲಿರುವ ಶಿಲ್ಪಕ್ಕೆ ದೀಪ ಹಚ್ಚಿ ಪೂಜೆಮಾದುವುದನ್ನು ಈಗಲೂ ಕಾಣಬಹುದಾಗಿದೆ. ದ್ವಾರ ಬಾಗಿಲದ ಹತ್ತಿರವೇ ಇರುವ ಚಿಕ್ಕಗುಡಿಯಲ್ಲಿ ಒಂದು ವೀರಗಲ್ಲು ಇದೆ. ಅದರಲ್ಲಿಯ ಶಿಲ್ಪ್ಗಗಳಿಗೆ ದ್ಯಾಮ
ವ್ವನ ಶಿಲ್ಪವೆಂದು ಹೇಳುತ್ತಾರೆ.
  ದ್ಯಾಮವ್ವನ ಕಿಂಡಿ ಇಲ್ಲಿಯೆ ಕೆಳಗೆ ಸಪ್ತ ಮಾತೃಕೆ ಶಿಲ್ಪವಿದೆ.

 ದ್ಯಾಮವ್ವ ತನ್ನ ಗಂಡನ ಮನೆಯವರ ಹೆಣ್ಣುಸಂತಾನಕ್ಕೆ ನನ್ನಂತೆ ಕಷ್ಟ ಬರಲಿ ಎಂದು ಶಾಪ ಕೊಟ್ತಿರುವಳಂತೆ.ಅಲ್ಲದೆ ತನ್ನ ತಮ್ಮ ಬಂದದ್ದನ್ನು ರಾಜದೂತರಿಗೆ ಚಾಡಿಹೇಳಿದ ಮಗ್ಗುಅಲ ಮನೆಯವರಿಗೂ ಶಾಪ ಕೊಟ್ತಿರುವಳಂತೆ. ಈಗಲೂ ಅವರಿಗೆ ಕಷ್ಟ ತಪ್ಪಿಲ್ಲವಂತೆ.
 
 
ಹೀಗೆ ಅನೇಕ ಕತೆಗಳು ದ್ಯಾಮವ್ವನ ಐತಿಹ್ಯದ ವ್ಯಕ್ತಿತ್ವವನ್ನು ಬಿಚ್ಚಿಡುತ್ತವೆ. ಆದರೆ ಸೂಕ್ಷ್ಮವಾಗಿ ಅವಲೋಕಿಸಿದರೆ ಬೀಸುವಕಲ್ಲು ಮದ್ದು ಆರೆಯುವ ಕಲ್ಲಾಗಿರಬಹು
ದೆಂದು ಗೊತ್ತಾಗುತ್ತದೆ. ಅದೇ ರೀತಿ ಸಪ್ತ ಮಾತೃಕೆಯ ಶಿಲ್ಪವನ್ನು ಅಕ್ಕ ತಮ್ಮರ ಶಿಲ್ಪವೆಂದು ಕರೆಯುವುದು ಗೊತ್ತಾಗುತ್ತದೆ. ಒಟ್ಟು ದ್ಯಾಮವ್ವನ ಬಲಿದಾನವನ್ನು ಜನಪದರು ಅತಿ ಶೃದ್ಧೆಯಿಂದ, ಗೌರವದಿಂದ ಕಂಡಿದ್ದಾರೆಂಬುದು ಗೊತ್ತಾಗುತ್ತದೆ.




 ಕಾವ್ಯ ಕಾರಜೋಳ ಬಿ. ಎ.  ೧

No comments:

Post a Comment