Tuesday, April 20, 2010

೭೬ನೆಯ ಕನ್ನಡ ಸಾಹಿತ್ಯ ಸಮ್ಮೇಳನ - ಗದಗ







೭೬ ನೆಯ ಸಮ್ಮೇಳನದ ಅಧ್ಯಕ್ಷೆ ಗೀತಾ ನಾಗಭೂಷಣ ಒಡಲಾಳದ ಮಾತುಗಳು



ತರಗತಿಯಲ್ಲಿ ಆಧುನಿಕ ಕವಿಗಳ ಕವಿತೆಗಳನ್ನು ಲೇಖಕರ ಕಾದಂಬರಿ, ಸಣ್ಣಕತೆ,ಪ್ರಬಂಧಗಳನ್ನು ಓದಿ ಪುಳಕಗೊಂಡಿದ್ದೇನೆ . ಅಂತಹ  ಸಾಹಿತಿಗಳನ್ನು ಪ್ರತ್ಯಕ್ಷವಾಗಿ ನೋಡುವ, ಅವರ ಮಾತುಗಳನ್ನು ಕೇಳುವ, ಅವರೊಂದಿಗೆ ಮಾತನಾದುವ ಅವಕಾಶ ಸಿಕ್ಕರೆ ಅದಕ್ಕಿಂತ ಹೆಚ್ಚಿನ ಭಾಗ್ಯವಿನ್ನೇನು ಬೇಕು ! ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳನ್ನು ಆಲಿಸುವ  ಮತ್ತು ಸಾಹಿತಿಗಳನ್ನು ಮಾತನಾಡಿಸುವ ಭಾಗ್ಯ ಸಿಗುತ್ತದೆಂದೆ ಹೋಗಲು ನಿರ್ಧರಿಸಿದೆ. ಪ್ರೊ. ಚಂದ್ರಗೌಡ ಕುಲಕರ್ಣಿಯವರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ದೊರೆತ ಕೂಡಲೇ ಉತ್ಸುಕನಾದೆ.

ನೆರೆ ಬರದ ಕಪ್ಪು ನೆರಳಿನಲ್ಲಿಯೂ ಗದಗ ಸಮ್ಮೇಳನಕ್ಕಾಗಿ ಸಂಭ್ರಮದಿಂದ ಸಿದ್ಧಗೊಂಡಿತ್ತು. ಅಧ್ಯಕ್ಷರ ಮೆರವಣಿಗೆ ಮತ್ತು ಉದ್ಘಾಟನೆ ಸಮಾರಂಭದಷ್ಟೊತ್ತಿಗೆ ಕನ್ನಡಿಗರ ಅಭಿಮಾನ ತಾರಕಕ್ಕೇರಿತ್ತು !

ಮೂರು ದಿನಗಳಲ್ಲಿ ಎಷ್ಟೊಂದು ಗೋಷ್ಠಿಗಳು,ಎಂತೆಂತಹ ಸಾಹಿತಿಗಳು, ಎಂತೆಂತಹ ಆಸಕ್ತ ಓದುಗರು, ಸಾಹಿತ್ಯಾಭಿಮಾನಿಗಳು... ಅಭೂತಪೂರ್ವ ಎನಿಸುವ ಮನರಂಜನೆ ಕಾರ್ಯಕ್ರಮಗಳು,ರಾಜ್ಯದ ಪ್ರಮುಖ ಪುಸ್ತಕ ಮಳಿಗೆಗಳು..  ಸಮೀಪದ ಪ್ರವಾಸಿ ತಾಣಗಳು... ನಮ್ಮೊಂದಿಗೆ ಊಟ ಮಾಡುವ ಸಾಹಿತಿ ದಿಗ್ಗಜರು,  ಪತ್ರಿಕೆ, ಟಿ.ವಿ. ರೇಡಿಯೋ ಮಾಧ್ಯಮದವರ ಅರ್ಥಪೂರ್ಣ ಪ್ರಸಾರಗಳು.... ಎಲ್ಲವನ್ನು ಸವಿಯುವ ಅವಕಾಶ ಸಿಕ್ಕದ್ದು ಈಗಲೂ ಮನಸ್ಸಿನಲ್ಲಿ ಹಚ್ಚಹಸಿರಾಗಿದೆ.

ಅಂತೆಯೇ ಈ ಸಮ್ಮೇಳನ ಕುರಿತು ೯೪ ಪುಟಗಳ  ‘ಅವಲೋಕನ’ ವನ್ನು ರಚಿಸಲು ಸಾಧ್ಯವಾಯಿತು. ಈ ಅವಲೋಕನವನ್ನು ಪ್ರಸಿದ್ಧ ಜಾನಪದ  ತಜ್ಞರಾದ ಶಂಭು ಬಳಿಗಾರ ಅವರು ಸ್ನೇಹ ಸಮ್ಮೇಳನದಲ್ಲಿ ಬಿಡುಗಡೆ ಮಾಡಿ ತುಂಬು ಹೃದಯದಿಂದ ಶುಭ ಹಾರೈಸಿದ್ದನ್ನು ನಾನೆಂದೂ ಮರೆಯುವದಿಲ್ಲ !
ಒಟ್ಟು ಈ ಸಮ್ಮೇಳನ ನನ್ನ ಮೇಲೆ ಅಗಾಧ ಪರಿಣಾಮವನ್ನು ಬೀರಿದೆ. ನನ್ನ ಅನುಭವಗಳನ್ನು ಬರವಣಿಗೆ ರೂಪದಲ್ಲಿ  ಅಭಿವ್ಯಕ್ತ ಮಾಡುವ ಶಕ್ತಿ ನೀಡಿದೆ.

ಶರಣಬಸವ ಚಿಂಚೋಳಿ ಬಿ. ಎ. ೧


No comments:

Post a Comment